`ಸ್ನೇಹಿತರು` ಚಿತ್ರಕ್ಕೆ ಹಾಡುಗಳ ಚಿತ್ರೀಕರಣ
Posted date: 19 Mon, Mar 2012 ? 09:39:52 AM

ರೇಖಾಜಗದೀಶ್ ಅರ್ಪಿಸುವ, ಸೌಂದರ್ಯ ಜಗದೀಶ್ ಫ಼ಿಲಂಸ್ ಲಾಂಛನದಲ್ಲಿ ಸೌಂದರ್ಯ ಜಗದೀಶ್ ನಿರ್ಮಿಸುತ್ತಿರುವ ‘ಸ್ನೇಹಿತರು ಚಿತ್ರಕ್ಕಾಗಿ ರಾಂನಾರಾಯಣ್ ಅವರು ಬರೆದಿರುವ ‘ತಿಂಡಿ ಆಯ್ತಾ ಸಾರ್ ಕಾಫ಼ಿ ಆಯ್ತಾ ಸಾರ್ ಊಟ ಆಯ್ತಾ ಸಾರ್ ಹೇಗಿದ್ದೀರಾ ಸಾರ್‘ ಎಂಬ ಹಾಡಿಗೆ ವಿಜಯರಾಘವೇಂದ್ರ, ತರುಣ್, ಸೃಜನ್‌ಲೋಕೇಶ್, ರವಿಶಂಕರ್, ಬಿರಾದಾರ್, ಚಿದಾನಂದ್, ಮನದೀಪ್‌ರಾಯ್, ಗುರುರಾಜ ಹೊಸಕೋಟೆ ಮುಂತಾದವರು ಹೆಜ್ಜೆ ಹಾಕಿದರು. ಮದನ್‌ಹರಿಣಿ ನೃತ್ಯ ಸಂಯೋಜಿಸಿದ ಈ ಹಾಡಿನ ಚಿತ್ರೀಕರಣ ಬೆಂಗಳೂರು ಸುತ್ತುಮುತ್ತ ನಡೆಯಿತು.
    ‘೩೦-೪೦ ಸೈಟಿದ್ರೆ ಸಚಿನ್‌ಗಿಂತ ಹೈಟ್ ಇದ್ರೆ ಹಾರ್ಟ್‌ನಲ್ಲಿ ಸ್ವಲ್ಪ ಸೀಟಿದ್ರೆ ಬಂದೇ ಬರ್ತಾಳೆ‘ ಎಂಬ ಚಿತ್ರದ ಮತ್ತೊಂದು ಗೀತೆಯ ಚಿತ್ರೀಕರಣ ನೈಸ್ ರೋಡ್‌ನಲ್ಲಿ ನಡೆದಿದೆ. ಶಿವಮೊಗ್ಗ ಶ್ಯಾಂ ಬರೆದಿರುವ ಈ ಹಾಡಿನ ಚಿತ್ರೀಕರಣದಲ್ಲಿ ವಿಜಯರಾಘವೇಂದ್ರ, ತರುಣ್, ಸೃಜನ್‌ಲೋಕೇಶ್, ರವಿಶಂಕರ್ ಹಾಗೂ ನಿಖಿತಾ ಅಭಿನಯಿಸಿದ್ದರು. ನಾಗೇಶ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.
     ರಾಮ್‌ನಾರಾಯಣ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ಎಂ.ಆರ್.ಸೀನು ಛಾಯಾಗ್ರಹಣ, ಗಣೇಶ್.ಎಂ ಸಂಕಲನ, ತ್ರಿಭುವನ್, ಹರ್ಷ ನೃತ್ಯ ನಿರ್ದೇಶನ, ಪಳನಿರಾಜ್, ರವಿವರ್ಮ ಸಾಹಸ ನಿರ್ದೇಶನ ಹಾಗೂ ನಂಜುಂಡಸ್ವಾಮಿ ಅವರ ಕಲಾ ನಿರ್ದೇಶನ ‘ಸ್ನೇಹಿತರು ಚಿತ್ರಕ್ಕಿದೆ.
    ವಿಜಯರಾಘವೇಂದ್ರ, ತರುಣ್‌ಚಂದ್ರ, ರವಿಶಂಕರ್, ಸೃಜನ್‌ಲೋಕೇಶ್, ಪ್ರಣೀತಾ, ಮಾ||ಸ್ನೇಹಿತ್, ಶರಣ್, ರಮೇಶ್‌ಭಟ್, ಗಿರಿಜಾಲೋಕೇಶ್, ನಿಖಿತಾ, ಶೋಭ್‌ರಾಜ್, ಬುಲೆಟ್‌ಪ್ರಕಾಶ್, ಸಿಹಿಕಹಿಚಂದ್ರು, ಸಾಧುಕೋಕಿಲಾ, ಟೆನ್ನಿಸ್‌ಕೃಷ್ಣ, ವಿ.ಮನೋಹರ್, ಮೋಹನ್‌ಜುನೇಜಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed